ಕನ್ನಡ ಕವಿವಾಣಿ ಮಾಸಪತ್ರಿಕೆ ಚಿಂತಾಮಣಿ ಅವರ ವತಿಯಿಂದ ರಾಜ್ಯಮಟ್ಟದ ಕವನ ಸ್ಪರ್ಧೆಯನ್ನು ಮಕ್ಕಳ ಸಾಹಿತ್ಯವನ್ನು ಬೆಳೆಸುವ ಉದ್ದೇಶದಿಂದ ರಾಜ್ಯಮಟ್ಟದ ಮಕ್ಕಳ ಗೀತೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಆಸಕ್ತ ಕವಿಗಳು ತಮ್ಮ ಸ್ವರಚಿತ ಮಕ್ಕಳ ಗೀತೆಗಳನ್ನು ಕಳುಹಿಸಿ.
👉👉👉👉👉 ಸೂಚನೆಗಳು 👈👈👈👈👈
- ಮಕ್ಕಳ ಗೀತೆಗಳು ಆಗಿರಬೇಕು
- ಸಾಲುಗಳ ಮಿತಿಯಿಲ್ಲ.
- ತಾವು ನಮಗೆ ಕಳುಹಿಸುವ ಗೀತೆಗಳು ಈ ಹಿಂದೆ ಯಾವುದೇ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಇತರ ಸ್ಪರ್ಧೆಗಳಲ್ಲಿ ಪ್ರಕಟವಾಗಿರಬಾರದು.
- ಒಬ್ಬರು ಒಂದು ಗೀತೆಯನ್ನು ಕಳುಹಿಸಬೇಕು
- ಮಕ್ಕಳ ಗೀತೆಗಳನ್ನು 15 ಏಪ್ರಿಲ್ 2020 ರ ಬುಧವಾರ ಸಂಜೆ 6:00 ಗಂಟೆ ಒಳಗೆ ಸೂಚಿಸಲಾದ ವಾಟ್ಸಪ್ ನಂಬರ್ ಗೆ ಕಳುಹಿಸಬೇಕು.
- ಅವಧಿ ಮೀರಿದ ನಂತರ ಬಂದ ಗೀತೆಗಳನ್ನು ಸ್ವೀಕರಿಸುವುದಿಲ್ಲ.
- ಸ್ಪರ್ಧೆಯಲ್ಲಿ ಆಯ್ಕೆಯಾಗುವ ಪ್ರಥಮ ದ್ವಿತೀಯ ತೃತೀಯ ಬಹುಮಾನ ಪಡೆಯುವ ಕವಿ ಕವಯತ್ರಿಯರಿಗೆ ಸಾಹಿತ್ಯ ಮಂದಾರ ಎಂಬ ರಾಜ್ಯಮಟ್ಟದ ಪ್ರಶಸ್ತಿ ಪತ್ರವನ್ನು ಇಮೇಲ್ ಗೆ ಕಳುಹಿಸಲಾಗುವುದು. ಸಮಾಧಾನಕರ ಬಹುಮಾನಗಳನ್ನು ಐದು ಜನರಿಗೆ ಅಭಿನಂದನಾ ಪತ್ರ ನೀಡಲಾಗುವುದು. ಆ ಕವಿಗಳಿಗೂ ಈ ಪ್ರಮಾಣ ಪತ್ರವನ್ನು ಅವರವರ ಇಮೇಲ್ ವಿಳಾಸಕ್ಕೆ ಕಳುಹಿಸಲಾಗುವುದು.
- ಸ್ಪರ್ಧೆಯಲ್ಲಿ ಭಾಗವಹಿಸುವ ಅವರಿಗೆ ಹಾಗೂ ವಿಜೇತರಾದವರಿಗೆ ಗೌರವಧನ ,ನಗದು ಬಹುಮಾನ ,ನೆನಪಿನ ಕಾಣಿಕೆ ನೀಡಲಾಗುವುದಿಲ್ಲ
- ಗೀತೆಗಳ ಮೇಲೆ ರಾಜ್ಯಮಟ್ಟದ ಮಕ್ಕಳ ಗೀತೆ ಸ್ಪರ್ಧೆಗೆ ಎಂದು ನಮೂದಿಸಿರಬೇಕು .
- ಗೀತೆಗಳ ಜೊತೆಗೆ ತಮ್ಮ ಭಾವಚಿತ್ರ ,ಮೊಬೈಲ್ ಸಂಖ್ಯೆ ,ಇಮೇಲ್ ವಿಳಾಸ ,ಪೂರ್ಣ ವಿಳಾಸ ಕಡ್ಡಾಯವಾಗಿ ಕಳುಹಿಸಬೇಕು.
- ಗೀತೆಗಳನ್ನು ಟೈಪ್ ಮಾಡಿ ಕಳುಹಿಸಬೇಕು ಫೋಟೋ ತೆಗೆದು ಕಳುಹಿಸಿದ ಅಥವಾ ಕೈಬರಹದ ಕವನಗಳನ್ನು ಸ್ವೀಕರಿಸಲಾಗುವುದಿಲ್ಲ.
- ಗೀತೆಗಳನ್ನು ಕಳುಹಿಸಬೇಕಾದ ವಾಟ್ಸಪ್ ಸಂಖ್ಯೆ : 8310502935
- ಗೀತೆಗಳ ಆಯ್ಕೆಯಲ್ಲಿ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಯಾವುದೇ ಪತ್ರ ವ್ಯವಹಾರಗಳಿಗೆ ಅವಕಾಶವಿರುವುದಿಲ್ಲ.
🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸
ಸಹೃದಯ ಕವಿ ಕವಯತ್ರಿಯರೆ ಸಮಯವನ್ನು ಸಾಹಿತ್ಯದೊಂದಿಗೆ ಕಳೆಯೋಣ. ಸಮಾಜಕ್ಕೆ ಕಾವ್ಯದ ಕಾಣಿಕೆಯನ್ನು ನೀಡೋಣ.
🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸
ಪ್ರತಿಭೆ ನಿಮ್ಮದು ಪ್ರೋತ್ಸಾಹ ನಮ್ಮದು
💐💐💐💐💐💐💐💐
✍️ ಕೆ ಎನ್ ಅಕ್ರಂಪಾಷ
ಸಂಪಾದಕರು
ಕನ್ನಡ ಕವಿವಾಣಿ ಮಾಸಪತ್ರಿಕೆ
ಚಿಂತಾಮಣಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ