ಭಾನುವಾರ, ಅಕ್ಟೋಬರ್ 1, 2017

ರಾಜ್ಯ ಗೌರವ ಸಲಹೆಗಾರರಾಗಿ ಶಬಾನಾ ಇ ಅಣ್ಣಿಗೇರಿ ನೇಮಕ


ಸಾಹಿತ್ಯಾಸಕ್ತರ ಕೈಗನ್ನಡಿಯಾಗಿ ರಾಜ್ಯಾದ್ಯಂತ ಖ್ಯಾತಿ ಗಳಿಸಿರುವ ಕನ್ನಡ ಕವಿವಾಣಿ ಪತ್ರಿಕೆಯ ರಾಜ್ಯ ಗೌರವ ಸಲಹೆಗಾರರನ್ನಾಗಿ ಬೆಳಗಾವಿ ಜಿಲ್ಲೆಯ ಸಂಪಗಾವ್ ನ ಶಬಾನಾ ಇ ಅಣ್ಣಿಗೇರಿರವರನ್ನು ನೇಮಕ ಮಾಡಲಾಗಿದೆಯೆಂದು ಪ್ರಧಾನ ಸಂಪಾದಕರಾದ ಕೆ.ಎನ್.ಅಕ್ರಂಪಾಷರವರು ತಿಳಿಸಿದ್ದಾರೆ. ಶಿಕ್ಷಕಿಯಾಗಿರುವ ಶಬಾನಾ ಇ ಅಣ್ಣಿಗೇರಿಯವರು ರಾಜ್ಯಪ್ರಶಸ್ತಿ ಪುರಸ್ಕೃತ ಲೇಖಕಿಯಾಗಿದ್ದು, ಅವರ ಸಾಹಿತ್ಯ, ಕನ್ನಡ ಹಾಗೂ ಸಮಾಜ ಸೇವೆಗಳನ್ನು ಗಮನಿಸಿ ಪತ್ರಿಕೆಯ ಗೌರವ ಸಲಹೆಗಾರರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿರುವ ಸಂಪಾದಕರು, ಪತ್ರಿಕೆಗೆ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡುವ ಮೂಲಕ ಪತ್ರಿಕೆಯ ಬೆಳವಣಿಗೆಗೆ ಸಹಕರಿಸುವಂತೆ ನೀಡಿರುವ ನೇಮಕಾತಿ ಪತ್ರದಲ್ಲಿ ವಿವರಿಸಿದ್ದಾರೆ.
Shabana E Annigeri State advisor

Shabana E Annigeri State advisor

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ