ಸಾಹಿತ್ಯಾಸಕ್ತರ ಕೈಗನ್ನಡಿಯಾಗಿ ರಾಜ್ಯಾದ್ಯಂತ ಖ್ಯಾತಿ ಗಳಿಸಿರುವ ಕನ್ನಡ ಕವಿವಾಣಿ ಪತ್ರಿಕೆಯ ರಾಜ್ಯ ಗೌರವ ಸಲಹೆಗಾರರನ್ನಾಗಿ ಬೆಳಗಾವಿ ಜಿಲ್ಲೆಯ ಸಂಪಗಾವ್ ನ ಶಬಾನಾ ಇ ಅಣ್ಣಿಗೇರಿರವರನ್ನು ನೇಮಕ ಮಾಡಲಾಗಿದೆಯೆಂದು ಪ್ರಧಾನ ಸಂಪಾದಕರಾದ ಕೆ.ಎನ್.ಅಕ್ರಂಪಾಷರವರು ತಿಳಿಸಿದ್ದಾರೆ. ಶಿಕ್ಷಕಿಯಾಗಿರುವ ಶಬಾನಾ ಇ ಅಣ್ಣಿಗೇರಿಯವರು ರಾಜ್ಯಪ್ರಶಸ್ತಿ ಪುರಸ್ಕೃತ ಲೇಖಕಿಯಾಗಿದ್ದು, ಅವರ ಸಾಹಿತ್ಯ, ಕನ್ನಡ ಹಾಗೂ ಸಮಾಜ ಸೇವೆಗಳನ್ನು ಗಮನಿಸಿ ಪತ್ರಿಕೆಯ ಗೌರವ ಸಲಹೆಗಾರರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿರುವ ಸಂಪಾದಕರು, ಪತ್ರಿಕೆಗೆ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡುವ ಮೂಲಕ ಪತ್ರಿಕೆಯ ಬೆಳವಣಿಗೆಗೆ ಸಹಕರಿಸುವಂತೆ ನೀಡಿರುವ ನೇಮಕಾತಿ ಪತ್ರದಲ್ಲಿ ವಿವರಿಸಿದ್ದಾರೆ.
ಕನ್ನಡ ಕವಿವಾಣಿಯು ಒಂದು ಸಾಹಿತ್ಯಿಕ ಮಾಸಪತ್ರಿಕೆಯಾಗಿದ್ದು, ಕಳೆದ ಹಲವಾರು ವರ್ಷಗಳಿಂದ ಕನ್ನಡದ ಕಂಪನ್ನು ಹರಡುವಲ್ಲಿ ತನ್ನ ಅವಿಸ್ಮರಣೀಯ ಕೊಡುಗೆಯನ್ನು ನೀಡುತ್ತಾ ಬರುತ್ತಿದೆ. ಪ್ರತಿತಿಂಗಳು ನೂರಾರು ಕನ್ನಡ ಮಿತ್ರರಿಗೆ ಉಚಿತವಾಗಿ ಸೇರಿ, ತನ್ನಲ್ಲಿ ಹುದುಗಿರುವ ಕನ್ನಡ ಸವಿಯನ್ನು ಎಲ್ಲರಿಗೂ ಉಣಬಡಿಸುತ್ತಿದೆ. ಇದು ಚಿಂತಾಮಣಿಯ ಯುವಸಾಹಿತಿ ಹಾಗೂ ಶಿಕ್ಷಕರಾಗಿರುವ ಕೆ.ಎನ್. ಅಕ್ರಂಪಾಷಾರವರ ಸಂಪಾದಕೀಯ ನೇತೃತ್ವದಲ್ಲಿ ಮೂಡಿಬರುತ್ತಿದೆ. ಯುವಕವಿ ಹಾಗೂ ಸಾಹಿತಿಗಳಿಗೆ ತಮ್ಮ ಕನ್ನಡ ಸಾಹಿತ್ಯವನ್ನು ಅಭಿವ್ಯಕ್ತಗೊಳಿಸಲು ಉತ್ತಮ ವೇದಿಕೆಯಾಗಿ ಕೂಡ ನಿರ್ವಹಿಸುತ್ತಿದೆ.
ಭಾನುವಾರ, ಅಕ್ಟೋಬರ್ 1, 2017
ರಾಜ್ಯ ಗೌರವ ಸಲಹೆಗಾರರಾಗಿ ಶಬಾನಾ ಇ ಅಣ್ಣಿಗೇರಿ ನೇಮಕ
ಸಾಹಿತ್ಯಾಸಕ್ತರ ಕೈಗನ್ನಡಿಯಾಗಿ ರಾಜ್ಯಾದ್ಯಂತ ಖ್ಯಾತಿ ಗಳಿಸಿರುವ ಕನ್ನಡ ಕವಿವಾಣಿ ಪತ್ರಿಕೆಯ ರಾಜ್ಯ ಗೌರವ ಸಲಹೆಗಾರರನ್ನಾಗಿ ಬೆಳಗಾವಿ ಜಿಲ್ಲೆಯ ಸಂಪಗಾವ್ ನ ಶಬಾನಾ ಇ ಅಣ್ಣಿಗೇರಿರವರನ್ನು ನೇಮಕ ಮಾಡಲಾಗಿದೆಯೆಂದು ಪ್ರಧಾನ ಸಂಪಾದಕರಾದ ಕೆ.ಎನ್.ಅಕ್ರಂಪಾಷರವರು ತಿಳಿಸಿದ್ದಾರೆ. ಶಿಕ್ಷಕಿಯಾಗಿರುವ ಶಬಾನಾ ಇ ಅಣ್ಣಿಗೇರಿಯವರು ರಾಜ್ಯಪ್ರಶಸ್ತಿ ಪುರಸ್ಕೃತ ಲೇಖಕಿಯಾಗಿದ್ದು, ಅವರ ಸಾಹಿತ್ಯ, ಕನ್ನಡ ಹಾಗೂ ಸಮಾಜ ಸೇವೆಗಳನ್ನು ಗಮನಿಸಿ ಪತ್ರಿಕೆಯ ಗೌರವ ಸಲಹೆಗಾರರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿರುವ ಸಂಪಾದಕರು, ಪತ್ರಿಕೆಗೆ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡುವ ಮೂಲಕ ಪತ್ರಿಕೆಯ ಬೆಳವಣಿಗೆಗೆ ಸಹಕರಿಸುವಂತೆ ನೀಡಿರುವ ನೇಮಕಾತಿ ಪತ್ರದಲ್ಲಿ ವಿವರಿಸಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)



ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ