- ಭಾರತದಲ್ಲಿ ಘೋಷಿಸಲ್ಪಟ್ಟ ಕೇವಲ 3 ರಾಷ್ಟ್ರೀಯ ರಜೆಗಳಲ್ಲಿ ಗಣರಾಜ್ಯೋತ್ಸವವು ಒಂದು. ಇನ್ನಿತರ ಎರಡು ರಾಷ್ಟ್ರೀಯ ರಜೆಗಳೆಂದರೆ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಾಂಧಿಜಯಂತಿ.
- ಯಾಕೆ 26ನೇ ಜನವರಿಯನ್ನು ಗಣರಾಜ್ಯೋತ್ಸವಕ್ಕೆ ಪರಿಗಣಿಸಲಾಯಿತು ನಿಮಗೆ ತಿಳಿದಿದೆಯೇ? 1930 ರ ಜನವರಿ 26 ರಂದು ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರರು ಬ್ರಿಟಿಷರ ವಿರುದ್ದ ಸಂಪೂರ್ಣ ಸ್ವಾತಂತ್ರ್ಯದ ಆಂದೋಲನ ಸಾರಿದ್ದರು. ಇದರ ವಿಶೇಷತೆಯನ್ನು ನೆನಪಿಸಲು ಭಾರತ ಸರ್ಕಾರವು ಜನವರಿ 26 ಅನ್ನು ಗಣರಾಜ್ಯೋತ್ಸವ ದಿನವನ್ನಾಗಿ ಘೋಷಿಸಿತು.
- ಮಹಾತ್ಮ ಗಾಂಧೀಜಿಯವರ ಅಚ್ಚುಮೆಚ್ಚಿನ ಹಾಡಾದ "ಅಬೈಡ್ ವಿಥ್ ಮಿ" ಅನ್ನು ಪ್ರತಿ ವರ್ಷ ಗಣರಾಜ್ಯೋತ್ಸವದ ಅಂಗವಾಗಿ ನುಡಿಸಲಾಗುತ್ತದೆ.
- ಇಡೀ ಪ್ರಪಂಚದ ಸಂವಿಧಾನಗಳಲ್ಲಿ, ಭಾರತದ ಸಂವಿಧಾನವು ಗಾತ್ರದಲ್ಲಿ ಎಲ್ಲವುಗಳಿಗಿಂತ ದೊಡ್ಡದಾಗಿದೆ. ಇದು 448 ಪರಿಚ್ಚೇಧಗಳನ್ನೊಳಗೊಂಡಿದ್ದು, ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಬರೆಯಲಾಗಿತ್ತು.
- ಭಾರತೀಯ ಸಂವಿಧಾನದ ಕೈಬರಹದ ಮೂಲಪ್ರತಿಗಳನ್ನು ಇಂದಿಗೂ ಸಹ ನೋಡಬಹುದು. ಅವುಗಳನ್ನು ಹೀಲಿಯಂ ತುಂಬಿದ ಡಬ್ಬಗಳಲ್ಲಿ ಸಂರಕ್ಷಿಸಿ, ಪಾರ್ಲಿಮೆಂಟ್ ನ ಗ್ರಂಥಾಲಯದಲ್ಲಿ ಇರಿಸಲಾಗಿದೆ.
- ಡಾ. ಅಂಬೇಡ್ಕರ್ ನೇತೃತ್ವದ ಸಮಿತಿಗೆ ಇಡೀ ಸಂವಿಧಾನವನ್ನು ಪೂರ್ಣಗೊಳಿಸಲು ಬರೋಬ್ಬರಿ ಎರಡು ವರ್ಷ ಮತ್ತು ಹನ್ನೊಂದು ತಿಂಗಳುಗಳು ಹಿಡಿಯಿತು.
- 1950ರಲ್ಲಿ ನಡೆದ ಭಾರತದ ಮೊಟ್ಟ ಮೊದಲನೇ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಇಂಡೋನೇಶ್ಯಾದ ಅಧ್ಯಕ್ಷ ಸುಕಾರ್ನೋರವರು ಭಾಗವಹಿಸಿದ್ದರು.
- "ಬೀಟಿಂಗ್ ರಿಟ್ರೀಟ್" ಎಂಬ ಕಾರ್ಯಕ್ರಮವನ್ನು ಗಣರಾಜ್ಯೋತ್ಸವ ಆಚರಣೆಯ 3ನೇ ಹಾಗೂ ಕೊನೇ ದಿನವಾದ 29ನೇ ಜನವರಿಯಂದು ಸಾಯಂಕಾಲ ನಡೆಸಲಾಗುತ್ತದೆ. ಇದನ್ನು ಭಾರತೀಯ ಸೇನೆಯ 3 ಮುಖ್ಯ ಅಂಗಗಳಾದ ಭೂಸೇನೆ, ಜಲಸೇನೆ ಮತ್ತು ವಾಯಸೇನೆಯ ಪ್ರದರ್ಶನಕಾರರು ಸೇರಿ ನಡೆಸಿಕೊಡುತ್ತಾರೆ.
ಕನ್ನಡ ಕವಿವಾಣಿಯು ಒಂದು ಸಾಹಿತ್ಯಿಕ ಮಾಸಪತ್ರಿಕೆಯಾಗಿದ್ದು, ಕಳೆದ ಹಲವಾರು ವರ್ಷಗಳಿಂದ ಕನ್ನಡದ ಕಂಪನ್ನು ಹರಡುವಲ್ಲಿ ತನ್ನ ಅವಿಸ್ಮರಣೀಯ ಕೊಡುಗೆಯನ್ನು ನೀಡುತ್ತಾ ಬರುತ್ತಿದೆ. ಪ್ರತಿತಿಂಗಳು ನೂರಾರು ಕನ್ನಡ ಮಿತ್ರರಿಗೆ ಉಚಿತವಾಗಿ ಸೇರಿ, ತನ್ನಲ್ಲಿ ಹುದುಗಿರುವ ಕನ್ನಡ ಸವಿಯನ್ನು ಎಲ್ಲರಿಗೂ ಉಣಬಡಿಸುತ್ತಿದೆ. ಇದು ಚಿಂತಾಮಣಿಯ ಯುವಸಾಹಿತಿ ಹಾಗೂ ಶಿಕ್ಷಕರಾಗಿರುವ ಕೆ.ಎನ್. ಅಕ್ರಂಪಾಷಾರವರ ಸಂಪಾದಕೀಯ ನೇತೃತ್ವದಲ್ಲಿ ಮೂಡಿಬರುತ್ತಿದೆ. ಯುವಕವಿ ಹಾಗೂ ಸಾಹಿತಿಗಳಿಗೆ ತಮ್ಮ ಕನ್ನಡ ಸಾಹಿತ್ಯವನ್ನು ಅಭಿವ್ಯಕ್ತಗೊಳಿಸಲು ಉತ್ತಮ ವೇದಿಕೆಯಾಗಿ ಕೂಡ ನಿರ್ವಹಿಸುತ್ತಿದೆ.
ಶುಕ್ರವಾರ, ಜನವರಿ 26, 2018
ಗಣರಾಜ್ಯೋತ್ಸವದ ಬಗ್ಗೆ 8 ಆಸಕ್ತಿಕರ ಅಂಶಗಳು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ