ಸೋಮವಾರ, ನವೆಂಬರ್ 13, 2017

ರಾಜ್ಯಮಟ್ಟದ ಕವಿಗೋಷ್ಠಿಗೆ ಚಿಂತಾಮಣಿ ಐದು ಮಂದಿ ಕವಿಗಳು ಆಯ್ಕೆ


ಚಿಂತಾಮಣಿ: ಅಜ್ಜಂಪುರ ಜಿ.ಸೂರಿ ಪ್ರತಿಷ್ಠಾನ, ರತ್ನ ಪ್ರಕಾಶನ ಕಡೂರು ಹಾಗೂ ಸೂರಿ ಸೃಷ್ಠಿಯ ಬರಹ ಲೋಕ ವಾಟ್ಸಪ್ ಬಳಗದ ವತಿಯಿಂದ ೬೨ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್ ೧೯ ಭಾನುವಾರದಂದು ಕಡೂರಿನಲ್ಲಿ ಆಯೋಜಿಸಲಾಗಿರುವ ರಾಜ್ಯಮಟ್ಟದ ಕವಿಗೋಷ್ಠಿಗೆ ಚಿಂತಾಮಣಿಯ ಕವಿಗಳಾದ ಕನ್ನಡ ಸಾಹಿತ್ಯ ಬಳಗದ ಅಧ್ಯಕ್ಷ ನಂಜಪ್ಪರೆಡ್ಡಿ, ರಾಜ್ಯಪ್ರಶಸ್ತಿ ಪುರಸ್ಕೃತ ಯುವಬರಹಗಾರ ಕೆ.ಎನ್.ಅಕ್ರಂಪಾಷ, ಚುಟುಕು ಕವಿ ಶಿ.ಮ.ಮಂಜುನಾಥ, ಕವಯತ್ರಿ ಹಾಗೂ ಲೇಖಕಿ ಜೀನತ್ ಉನ್ನೀಸಾ ಹಾಗೂ ಚಿಕ್ಕಬಳ್ಳಾಪುರದ ದೊಡ್ಡತಮ್ಮನ ಹಳ್ಳಿಯ ಯುವಕವಿ ಗಂಗರಾಜು ರವರುಗಳನ್ನು ಆಯ್ಕೆಮಾಡಲಾಗಿದೆ ಆಯೋಜಕರಾದ ಪೃಥ್ವಿ ಸೂರಿ ರವರು ತಿಳಿಸಿದ್ದಾರೆ.


   ರಾಜ್ಯಮಟ್ಟದ ಕವಿಗೋಷ್ಠಿಗೆ ಆಯ್ಕೆಯಾಗಿರುವ ಈ ಐದು ಮಂದಿ ಕವಿಗಳು ನವೆಂಬರ್ ೧೯ ರಂದು ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ನಡೆಯಲಿರುವ ಅದ್ಧೂರಿ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಕವನವಾಚಿಸಲಿದ್ದಾರೆ.ಕವಿಗೋಷ್ಠಿಯನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ವಸುಂಧರ ಭೂಪತಿ ರವರು ಉದ್ಘಾಟಿಸಲಿದ್ದು, ಚಿಕ್ಕಮಗಳೂರಿನ ಖ್ಯಾತ ಸಾಹಿತಿಗಳಾದ ಡಾ||ಮಂಜುಳಾ ಹುಲ್ಲಳ್ಳಿ ಅಧ್ಯಕ್ಷತೆ ವಹಿಸಿಲಿದ್ದಾರೆ.

ಅಭಿನಂದನೆ: ರಾಜ್ಯಮಟ್ಟದ ಕವಿಗೋಷ್ಠಿಗೆ ಆಯ್ಕೆಯಾಗಿರುವ ಈ ಐದು ಮಂದಿ ಕವಿಗಳನ್ನು ಚಿಂತಾಮಣಿಯ ಹಲವು ಕನ್ನಡ ಪರ ಸಂಘಟನೆಗಳು, ಕವಿ ಕಲಾವಿದರು, ಅಭಿಮಾನಿಗಳು ಅಭಿನಂದಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ