ಶುಕ್ರವಾರ, ನವೆಂಬರ್ 10, 2017

ಮಾತನಾಡಿದ ಗೌರಿ


ನಾನು ನಿಮ್ಮ ಗೌರಿ
ಕನ್ನಡ ನಾಡಿನ ಕುವರಿ
ಹಿಡಿದಿದ್ದೆ ವಿಚಾರವಾದದ ದಾರಿ
ಕೋಮುವಾದಿಗಳು ಹಾಕಿದರು
ನನ್ನ ಬೆನ್ನಿಗೆ ಚೂರಿ
ನಾನು ಜೀವನದುದ್ದಕ್ಕೂ ಕೋಮುವಾದ,
ಅಸ್ಪೃಶ್ಯತೆ,ಅಸಮಾನತೆಗಳ
ವಿರುದ್ಧ ಹೋರಾಡಿದೆ
ಅನೇಕ ಮಂದಿ ಸಮಾಜ
ಘಾತುಕರ ಮುಖವಾಡ ಕಳಿಚಿದೆ
ನಕ್ಸಲ್ ಎಂಬ ನರಕದಲ್ಲಿ ಸಿಲುಕಿದ್ದವರ
ಸಮಾಜಕ್ಕೆ ಬರಮಾಡಿಕೊಂಡೆ
ಅವರ ಬದುಕನ್ನು ಹಸನಾಗಿಸಿದೆ
ಕೋಮುವಾದವ ಖಂಡಿಸಿದೆ
ಕೋಮುವಾದಿಗಳ ವಿರುದ್ಧ
ದಿಟ್ಟತನದಿ ಹೋರಾಡಿದೆ.
ಅವರ ಮನದಲ್ಲಿ ನಡುಕ ಹುಟ್ಟಿಸಿದ್ದೆ
ಗೌರಿಲಂಕೇಶ್ ಪತ್ರಿಕೆಯ ಸಂಪಾದಕಿಯಾಗಿ
ವಿಚಾರವಾದಿ ಲೇಖಕಿಯಾಗಿ
ನಾನು ಪ್ರಗತಿ ಪರರ ಬೆಂಬಲಕ್ಕೆ ನಿಂತೆ.
ಮತೀಯವಾದಿಗಳ ಕುತಂತ್ರಗಳ ಬಯಲಿಗೆಳೆದೆ
ಇನ್ನೂ ಅನೇಕ ಪ್ರಗತಿ ಪರ
ಕಾರ್ಯಗಳನ್ನು ಮಾಡಬೇಕೆಂದಿದ್ದೆ
ಆದರೆ ನನ್ನ ವಿಚಾರವಾದವ ಸಹಿಸದ
ಕೆಲ ಶಿಖಂಡಿಗಳು ನನ್ನ ಮೇಲೆ ಗುಂಡು ಹಾರಿಸಿದರು.
ಇಂದು ನಾನು ಕನ್ನಡ ನಾಡಿನಲ್ಲಿಲ್ಲ
ಆದರೂ ಜಗತ್ತಿನ ಮನೆ-ಮನಗಳಲ್ಲಿ ಉಳಿದಿರುವೆನಲ್ಲ
ಗೌರಿಯನ್ನು ಕೊಂದೆವೆಂದು ಸಂತಸದಿ ಬೀಗದಿರಿ
ನೀವು ಕೊಂದಿರುವುದು ಒಬ್ಬ ಗೌರಿಯನ್ನು
ಆದರೆ ನಿಮ್ಮಿಂದ ಕೊಲ್ಲಲಾಗದು ನನ್ನ ಸಿದ್ದಾಂತಗಳನ್ನು
ಸಂತೋಷದಿ ಹೆಮ್ಮೆಪಡದಿರಿ ಸತ್ತಳೆಂದು ಗೌರಿ
ಹತ್ತಿರದಲ್ಲಿ ಉಳಿದ ಗೌರಿಯರು ಕಟ್ಟುತ್ತಾರೆ ನಿಮ್ಮ ಗೋರಿ

ಕೆ.ಎನ್.ಅಕ್ರಂಪಾಷ
ರಾಜ್ಯಪ್ರಶಸ್ತಿ ಪುರಸ್ಕೃತ ಬರಹಗಾರ/ ಶಿಕ್ಷಕ
ಸಂಪಾದಕರು, ಕನ್ನಡ ಕವಿವಾಣಿ ಪತ್ರಿಕೆ
ಮೊ:೯೬೧೧೧೭೫೩೮೦

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ