ಮಂಗಳವಾರ, ನವೆಂಬರ್ 28, 2017

ನವೆಂಬರ್-೩೦ : ಮೈಲಾಂಡ್ಲಹಳ್ಳಿಯಲ್ಲಿ ನಾಡಗೀತೆ ಬರವಣಿಗೆ ಸ್ಪರ್ಧೆ

ಕೋಲಾರದ ರೆಲ್ಟನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಚಿಂತಾಮಣಿಯ ಕನ್ನಡ ಕವಿವಾಣಿ ಮಾಸ ಪತ್ರಿಕೆಯ ಸಂಯುಕ್ತಾಶ್ರಯದಲ್ಲಿ ನವೆಂಬರ್ ೩೦ ರ ಗುರುವಾರ ಮಧ್ಯಾಹ್ನ ೧:೩೦ ಗಂಟೆಗೆ ಸರಿಯಾಗಿ ತಾಲ್ಲೂಕಿನ ಮೈಲಾಂಡ್ಲಹಳ್ಳಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೬೨ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಕುವೆಂಪು ರಚಿತ ನಾಡಗೀತೆ ಬರವಣಿಗೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ರೆಲ್ಟನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ರಿಯಾಜ್ ಅಹಮದ್ ರವರು ತಿಳಿಸಿದ್ದಾರೆ.


     ಕಾರ್ಯಕ್ರಮಕ್ಕೆ ಮುಖ್ಯಅತಿಥಿಗಳಾಗಿ ರಾಜ್ಯಪ್ರಶಸ್ತಿ ಪುರಸ್ಕೃತ ಶಿಕ್ಷಕ ಹಾಗೂ ಕವಿವಾಣಿ ಪತ್ರಿಕೆಯ ಸಂಪಾದಕರಾದ ಕೆ.ಎನ್.ಅಕ್ರಂಪಾಷ, ತಾಲ್ಲೂಕು ಸರ್ಕಾರಿ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಅಶೋಕ್ ಕುಮಾರ್, ಕನ್ನಡಿಗರ ಸಾರಥ್ಯ ಸಂಘಟನೆಯ ಜಿಲ್ಲಾಧ್ಯಕ್ಷ ಅಂಬರೀಶ್, ಸದರಿ ಶಾಲೆಯ ಮುಖ್ಯಶಿಕ್ಷಕಿ ಹಸೀನಾ ಬೇಗಂ,ಚುಟುಕು ಕವಿ ಶಿ.ಮ.ಮಂಜುನಾಥ, ಲೇಖಕಿ ಜೀನತ್ ಉನ್ನೀಸಾ, ದೊಡ್ಡತಮ್ಮನ ಹಳ್ಳಿಯ ಯುವಕವಿ ಗಂಗರಾಜು ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಮುಂತಾದ ಗ್ರಾಮದ ಗಣ್ಯರು ಭಾಗವಹಿಸಲಿದ್ದಾರೆಂದು ಅವರು ವಿವರಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ