ಗುರುವಾರ, ಆಗಸ್ಟ್ 31, 2017

ಅಕ್ರಂಪಾಷಾರವರ ಕೆಲವು ಕವನಗಳು


ವಿಪರ್ಯಾಸ
ಎಲ್ಲರೂ ಪ್ರಜಾಪ್ರಭತ್ವವಾದಿಗಳೇ
ಪ್ರಜಾಪ್ರಭುತ್ವದ ಸಿದ್ದಾಂತಗಳನ್ನು ನೇಣಿಗೆರಿಸುತ್ತಿದ್ದಾರೆ
ಎಲ್ಲರೂ ಪ್ರಜಾಸೇವಕರೆ
ಪ್ರಜೆಗಳ ರಕ್ತ ಹೀರುತ್ತಿದ್ದಾರೆ
ಎಲ್ಲರೂ ಲೌಕಿಕವಾದಿಗಳೇ
ಅಲೌಕಿಕವಾಗಿ ವರ್ತಿಸುತ್ತಿದ್ದಾರೆ
ಎಲ್ಲರೂ ತ್ಯಾಗಮೂರ್ತಿಗಳೇ
ಮನೆ ಮೇಲೆ ಮನೆ ಕಟ್ಟುತ್ತಿದ್ದಾರೆ
ಎಲ್ಲರೂ ಅಹಿಂಸಾವಾದಿಗಳೇ
ಆದರೂ ಹತ್ಯೆಗಳನ್ನು ಮಾಡುತ್ತಿದ್ದಾರೆ
ಎಲ್ಲರೂ ದೇಶಭಕ್ತರೆ
ದೇಶದುದ್ದಗಲಕ್ಕೂ ದೊಚುತ್ತಿದ್ದಾರೆ.
******

ಬೇಸಿಗೆ ರಜೆ
ಬೇಸಿಗೆ ರಜೆಯಲಿ
ಹಾಸಿಗೆ ಏತಕೆ
ತಣ್ಣಗೆ ನೆಲವೇ ಇಹುದಲ್ಲ
ತಿನ್ನಲು ಹಣ್ಣು
ಬೇರೆಯದೇತಕೆ
ಕಲ್ಲಂಗಡಿಯೇ ಇದೆಯಲ್ಲಾ
ತಣ್ಣನೆ ನೀರಿಗೆ
ಫ್ರಿಜ್ ಅದೇತಕೆ
ಮಣ್ಣಿನ ಮಡಿಕೆ ಇಹುದಲ್ಲಾ
ಮಾಜಾ,ಪೆಪ್ಸಿ ಕೋಲಾ ಏತಕೆ
ನಿಂಬೆ ಶರಬತ್ ಸಾಕಲ್ಲ
ಹಸಿಬಿಸಿ ಫ್ಯಾನಿನ
ಗಾಳಿಯ ದೇತಕೆ
ಬೇಸಣಿಗೆ ಕೈಯಲ್ಲಿದೆಯಲ್ಲ
ಬೇಸಿಗೆ ಎಂದರೆ
ಹೇದರುವುದೇತಕೆ
ಸ್ವಾಗತಿಸೋಣ
ಪ್ರೀತಿಯಿಂದ ಹೌದಲ್ಲ
*******
  
ನಿನ್ನ ನೆನಪಲಿ
 ಚೆಲುವೇ....
ಯಾವ ಜನುಮದ ಬಂಧವೋ
ನೀ ನನ್ನ ಬಾಳಿಗೆ ಬೆಳಕಾಗಿ ಬಂದೆ
ಕತ್ತಲಾಗಿದ್ದ ನನ್ನ ಹೃದಯದಲ್ಲಿ
ಜ್ಯೋತಿಯ ನೀ ಬೆಳಗಿಸಿದೆ.
ಬರಡಾಗಿದ್ದ ನನ್ನ ಜೀವಕ್ಕೆ
ಪ್ರೀತಿಯ ಹನಿಗಳನ್ನು ಸಿಂಚನಗೈದು
ಹೊಸ ಚೈತನ್ಯ ನೀಡಿದೆ
ಸರಳ ಮಾರ್ಗದಲ್ಲಿ ಬದುಕಲು
ಮಾರ್ಗದರ್ಶನ ನೀಡಿದೆ.
ಸುಂದರ ಬದುಕಿಗೆ
ಸೊಗಸಾದ ಪಾಠ ನೀ ಕಲಿಸಿದೆ
ಲಯ ತಪ್ಪಿದ ನನ್ನ ಪಯಣಕೆ
ಮಧುರ ಲಯವನಿಟ್ಟೆ
ವಿಧಿಯಾಟಕ್ಕೆ ಸಿಲುಕಿ
ನಲುಗಿದ ನನ್ನ ಬಾಳಲ್ಲಿ ಬಂದು
ನಿನ್ನ ಹೃದಯ ವೈಶಾಲ್ಯತೆಯನ್ನು ಮೆರೆದೆ
ನನ್ನೀ ಜೀವಕೆ ನೀ ಹೊಸ ಮೆರುಗನ್ನು ಕೊಟ್ಟೆ.|
***********
  
ಡಿಯ ಬೇಡಿರಣ್ಣ!
ಕಡಿಯ ಬೇಡಿರಣ್ಣ
ನೀವು ಮರಗಿಡಿಗಳನು ಕಡಿಯ ಬೇಡಿರಣ್ಣ||ಕ||
ಮರಗಿಡಿಗಳಿಲ್ಲದೆ
ಪರಿಸರಕ್ಕೆ ಹಸಿರಿಲ್ಲಣ್ಣ
ಹಸಿರಿಲ್ಲದೆ
ಜನರಿಗೆ ಉಸಿರಿಲ್ಲಣ್ಣ||ಕ||

ಮರಗಿಡಗಳಿಲ್ಲದೆ
ಭುವಿಗೆ ಮಳೆಯಿಲ್ಲಣ್ಣ
ಮಳೆಯಿಲ್ಲದಿದ್ದರೆ
ಬೆಳೆ ಬೆಳೆಯುವುದಿಲ್ಲಣ್ಣ||ಕ||
ಮರಗಿಡಗಳಿಲ್ಲದಿದ್ದರೆ
ಬರುವುದು ಭೂಕಂಪ,ಸುನಾಮಿ,ಚಂಡಮಾರುತ
ಆಗ ಆಗುವರೆಲ್ಲರು
ಅನಾಥರಣ್ಣ||ಕ||

ಜೀವ ಸಂಕುಲ ರಕ್ಷಿಸಲು
ಮರಗಿಡಗಳನ್ನು ಕಡಿಯ ಬೇಡಿರಣ್ಣ
ಗಿಡ ಮರಗಳನ್ನು ಬೆಳೆಸಿ
ಮಾಲಿನ್ಯ ತಡೆಯಿರಣ್ಣ|| ಕ||

********

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ