ಬುಧವಾರ, ಡಿಸೆಂಬರ್ 13, 2017

ಕವಿಪರಿಚಯ - ಕೆ.ಎನ್.ಅಕ್ರಂಪಾಷ

ಕವಿಪರಿಚಯ

ಹೆಸರು : ಕೆ.ಎನ್.ಅಕ್ರಂಪಾಷ
ಜನ್ಮ ದಿನಾಂಕ: ೯-೦೪-೧೯೯೫
ತಂದೆ-ತಾಯಿ : ಕೆ.ಸೈಯದ್ ನೂರುಲ್ಲಾ, ಜರೀನಾ ಬಾನು
ವಿದ್ಯಾರ್ಹತೆ: ಬಿಎಸ್ಸಿ , ಬಿ.ಎ ಪದವೀಧರ
ಮೊಬೈಲ್ ಸಂಖ್ಯೆ : ೯೬೧೧೧೭೫೩೮೦
ವಿಳಾಸ: ಕೆ.ಎನ್.ಅಕ್ರಂಪಾಷ, ಯುವಕವಿ, ವಾರ್ಡ್ ನಂ ೨೭, ಶಾಂತಿನಗರ, ಚಿಂತಾಮಣಿ-೫೬೩೧೨೫
ಇ-ಮೇಲ್: kannadaakram@gmail.com
ವೃತ್ತಿ : ಶಿಕ್ಷಕರು

ಪ್ರವೃತ್ತಿ:
ಕವನ ,ಕಥೆ , ಪರಿಚಯ ಲೇಖನ ,ಚುಟುಕು ,ಲೇಖನ ,ಚಿತ್ರಕಲೆ , ಮುಂತಾದವುಗಳ ರಚನೆ. ಈಗಾಗಲೇ ಕನ್ನಡದ ಪ್ರಮುಖ ವಿವಿಧ ಪತ್ರಿಕೆ , ಕವನ ಸಂಕಲನ , ಹಾಗು ಸ್ಮರಣ ಸಂಚಿಕೆಗಳಲ್ಲಿ ೨೦೦ ಕ್ಕೂ ಹೆಚ್ಚು  ಬರಹಗಳು ಪ್ರಕಟಗೊಂಡಿವೆ.

ಸಾಹಿತ್ಯ ಪ್ರಕಾರ: ಮಕ್ಕಳ ಕಥೆ, ಕವನ , ಚುಟುಕು, ಲೇಖನ ,ಅಂಕಣ ಬರಹ

ಅಂಕಣ ಬರಹಗಾರನಾಗಿ
೧.ಮಕ್ಕಳ ಪುಟ---ಜನಮನಸಂಚಲನ ಮಾಸ ಪತ್ರಿಕೆ, ಬೆಂಗಳೂರು
೨.ಸ್ತ್ರೀಜಾಗೃತಿ - ಮಾಸಪತ್ರಿಕೆ, ಬೆಂಗಳೂರು

ಪ್ರಶಸ್ತಿ-ಪುರಸ್ಕಾರಗಳು
೧. ಕುವೆಂಪು ಎಂಬ ಕವನಕ್ಕೆ ರಾಜ್ಯಮಟ್ಟದ ರಂಗಶ್ರೀ ಕಾವ್ಯ ಸೌರಭ ಪ್ರಶಸ್ತಿ ೨೦೧೩
೨. ರಾಜ್ಯಮಟ್ಟದ ಉತ್ತಮ ಚುಟುಕು ಕವಿ ಪ್ರಶಸ್ತಿ ೨೦೧೪
೩. ತಾಲ್ಲೂಕು ಆಡಳಿತದಿಂದ ೨೦೧೪ ರ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ
೪. ರಾಜ್ಯಮಟ್ಟದ ಸಾಹಿತ್ಯ ಪ್ರತಿಭಾ ರತ್ನ ಪ್ರಶಸ್ತಿ ೨೦೧೫
೫. ರಾಜ್ಯಮಟ್ಟದ ಯುವ ಸಾಧಕ ರತ್ನ ಪ್ರಶಸ್ತಿ ೨೦೧೫
೬. ರಾಜ್ಯಮಟ್ಟದ ಕನ್ನಡ ಸಿರಿ ಪ್ರಶಸ್ತಿ ೨೦೧೫
೭. ರಾಜ್ಯ, ತಾಲೂಕು, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಹಾಗೂ ಸಾಹಿತ್ಯ ಸಮ್ಮೇಳನಗಳಲ್ಲಿ ಕವನ ವಾಚನ.
೮. ಹಲವು ಕನ್ನಡ ಪರ ಸಂಘಟನೆಗಳಿಂದ ಸನ್ಮಾನ.

ಬಿಡುಗಡೆಗೊಂಡ ಕೃತಿಗಳು
೧.ಚಂದ್ರನ ಮಗಳು (ಸ್ವರಚಿತ ಮಕ್ಕಳ ಕಥಾ ಸಂಕಲನ) ೨೦೧೪ ರಲ್ಲಿ ಬಿಡುಗಡೆ.
೨.ಕಾವ್ಯ ಸಿರಿ (ಸಂಪಾದಿತ),೨೦೧೪ರಲ್ಲಿ ಬಿಡುಗಡೆ.
೩.ಕನ್ನಡ ಸಿರಿ (ಸಂಪಾದಿತ), ೨೦೧೫ ರಲ್ಲಿ ಬಿಡುಗಡೆ
೪.ಮಿತ್ರವಾಣಿ (ಸಂಪಾದಿತ) ೨೦೧೩ ರಲ್ಲಿ ಬಿಡುಗಡೆ
೫.ಅಮರ ಜ್ಯೋತಿ (ಸಂಪಾದಿತ) ೨೦೧೬ ರಲ್ಲಿ ಬಿಡುಗಡೆ
೬.ಸವಿಗನ್ನಡ (ಸಂಪಾದಿತ ಕವನ ಸಂಕಲನ) ೨೦೧೬ ರಲ್ಲಿ ಬಿಡುಗಡೆ
೭.ಮೈಸೂರು ಹುಲಿ ಟಿಪ್ಪು (ಸಂಪಾದಿತ ಲೇಖನಗಳ ಸಂಗ್ರಹ) ೨೦೧೬ ರಲ್ಲಿ ಬಿಡುಗಡೆ
೮.ಹೂವಿನಂತೆ ಮಕ್ಕಳು (ಸ್ವರಚಿತ ಮಕ್ಕಳ ಕಥಾ ಸಂಕಲನ ಬಿಡುಗಡೆ ಹಂತದಲ್ಲಿ)

ಪ್ರಸ್ತುತ ಕನ್ನಡ ಸೇವೆ :
೧. ಚಿಂತಾಮಣಿ ತಾಲ್ಲೂಕು ಸಿರಿಗನ್ನಡ ವೇದಿಕೆಯ ಅಧ್ಯಕ್ಷನಾಗಿ
೨. ಚಿಂತಾಮಣಿ ತಾಲ್ಲೂಕು ಸ್ವಾಭಿಮಾನಿ ಕನ್ನಡ ಸೇವಾ ಸಮಿತಿ ಸಾಂಸ್ಕೃತಿಕ ಪ್ರತಿನಿಧಿಯಾಗಿ
೩. ಚಿಕ್ಕಬಳ್ಳಾಪುರ ಜಿಲ್ಲಾ  ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ
೪. ರಾಜ್ಯಮಟ್ಟದ ಕನ್ನಡ ಕವಿವಾಣಿ ಸಾಹಿತ್ಯ ಮಾಸಪತ್ರಿಕೆಯ ಸಂಪಾದಕನಾಗಿ
೫. ಚಿಂತಾಮಣಿ ತಾಲ್ಲೂಕು ಟಿಪ್ಪು ವಿಚಾರವೇದಿಕೆಯ ಸಂಚಾಲಕನಾಗಿ
೬. ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯನಾಗಿ 
೪. ಹವ್ಯಾಸಿ ಪತ್ರಕರ್ತನಾಗಿ ಕನ್ನಡ ಸೇವೆ

ಇತರೆ ಕನ್ನಡ ಸೇವೆ
೧. ಚಿಂತಾಮಣಿ ತಾಲೂಕು ತೃತೀಯ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಯ ಸಂಪಾದಕನಾಗಿ (೨೦೧೪)

ದಾಖಲೆಯ ಸಾಧನೆಗಳು
೧. ರಾಜ್ಯದಲ್ಲೇ ೧೮ ವರ್ಷದ ವಯಸ್ಸಿಗೆ  ಪತ್ರಿಕೆಯನ್ನು ಪ್ರಾರಂಭಿಸಿದ ಮೊದಲ ಯುವಕ.
೨. ರಾಜ್ಯಮಲ್ಲೇ ಕಿರಿಯ ವಯಸ್ಸಿಗೆ ಮೊದಲ ಸಂಪಾದಕ
೩. ಕವಿವಾಣಿ ಪತ್ರಿಕೆಯು ೨೦ ಪುಟಗಳನ್ನೊಳಗೊಂಡಿದ್ದು, ಸಾಹಿತ್ಯ ಪತ್ರಿಕೆ ಯಾಗಿದೆ, ಪತ್ರಿಕೆಯಲ್ಲಿ ರಾಜ್ಯದ ಎಲ್ಲಾ ಉದಯೋನ್ಮುಖ, ಹಿರಿಯ-ಕಿರಿಯ , ವಿದ್ಯಾರ್ಥಿ-ವಿಧ್ಯಾರ್ಥಿನಿಯರಿಗೂ ಅವಕಾಶವನ್ನು ಕಲ್ಪಿಸಿಕೊಟ್ಟು ಅವರ ಬರಹಗಳನ್ನು ಪ್ರಕಟಿಸುತ್ತಿದ್ದೇನೆ ಹಾಗೂ ಎಲೆಮರೆಕಾಯಿಯಂತೆ ಅಮೂಲ್ಯ ಸೇವೆ ಸಾಧನೆ ಮಾಡುತ್ತಿರುವವರನ್ನು ಗುರುತಿಸಿ ಅವರ ಪರಿಚಯವನ್ನು ಪತ್ರಿಕೆಯಲ್ಲಿ ಪ್ರಕಟಿಸುವ ಮೂಲಕ ರಾಜ್ಯಕ್ಕೆ ತಿಳಿಯುವಂತೆ ಮಾಡುತ್ತಿದ್ದೇನೆ.ಪತ್ರಿಕೆಯನ್ನು ಉಚಿತವಾಗಿ ವಿತರಿಸುತ್ತಿದ್ದೇನೆ
೪. ಕಿರಿಯ ವಯಸ್ಸಿಗೆ ಹಲವಾರ ಪ್ರಶಸ್ತಿ ಪುರಸ್ಕಾರಗಳಿಗೆ ಆಯ್ಕೆ
೫. ಎಸ್.ಎಸ್.ಎಲ್.ಸಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಉಚಿತ ಬೋಧನಾ ತರಗತಿಗಳು ಪ್ರತಿ ವರ್ಷ ನಡೆಸುತ್ತಿರುವುದು. (ಊಟವೂ ಉಚಿತ)
೬. ಹಲವು ಬೇಸಿಗೆ ಶಿಬಿರಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ
೭. ಮಕ್ಕಳಿಗಾಗಿ ಉಚಿತ ೩ ದಿನಗಳ ಬೇಸಿಗೆ ಶಿಬಿರ ಆಯೋಜನೆ
೮. ಡಿ.ಕೆ.ರವಿ ಸ್ಮರಣಾರ್ಥ ರಾಜ್ಯಮಟ್ಟದ ಕವನ ಸ್ಪರ್ಧೆ-೨೦೧೬ ಆಯೋಜನೆ.

ಬರಹಗಳು ಪ್ರಕಟ ಗೊಂಡ ಪ್ರಮುಖ ಪತ್ರಿಕೆಗಳು
ಸಂಯುಕ್ತ ಕರ್ನಾಟಕ , ವಿಜಯ ಕರ್ನಾಟಕ, ಉದಯವಾಣಿ, ಕನ್ನಡ ಪ್ರಭ, ವಿಜಯವಾಣಿ, ಆಯುಷ್ ಧಾತ, ಜನಮನದ ಸಂಚಲನ, ವಾರ್ತಾಭಾರತಿ, ಉದಯ ಮಿತ್ರ, ಕೋಲಾರ ಪತ್ರಿಕೆ, ಕೋಲಾರವಾಣಿ, ಅನನ್ಯ ನುಡಿ, ಕರ್ಮವೀರ, ಮಂಗಳ, ಸುಧಾ, ಚಿಂತಾಮಣಿ ವಾಣಿ, ಸ್ತ್ರೀಜಾಗೃತಿ ಮುಂತಾದವು.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ