ರಂಗಾಪುರ ಎಂಬ ನಗರದಲ್ಲಿ ರಾಮು ಎಂಬ ಉಪ್ಪಿನ ವ್ಯಾಪಾರಿ ವಾಸಿಸುತ್ತಿದ್ದ. ಅವನು ಪ್ರತಿದಿನ
ಕತ್ತೆಯ ಮೇಲೆ ಉಪ್ಪಿನ ಮೂಟೆಯನ್ನು ಹಾಕಿ ಕೊಂಡು ಗ್ರಾಮಗಳೆಲ್ಲ ಸುತ್ತಿ ಮಾರುತ್ತಿದ್ದನು. ಕೆಲವು
ದಿನಗಳಲ್ಲಿ ಆತನ ಖರ್ಚು ಹೋಗಿ ನೂರಾರು ರೂಪಾಯಿ ಉಳಿಯಿತಿತ್ತು. ಆತನು ವಾಸಿಸುತ್ತಿದ್ದ ಗುಡಿಸಲು
ಮುರಿದು ಬೀಳುವ ಹಾಗೆ ಇತ್ತು. ಆದ್ದರಿಂದ ತನ್ನ ಬಳಿ ಉಳಿದಿರುವ ಹಣವನ್ನು ಈ ಗುಡಿಸಿಲಿನಲ್ಲಿ
ಇಡುವುದು ಕ್ಷೇಮವಲ್ಲ ಎಂದು ಕೊಂಡು ಪಕ್ಕದ ಊರಿನಲ್ಲಿ ವಾಸಿಸುತ್ತಿದ್ದ ತನ್ನ ಸ್ನೇಹಿತ ಬಟ್ಟೆ
ವ್ಯಾಪಾರಿ ಸೋಮುವಿನ ಬಳಿ ಹೋಗಿ.
ನಂತರ ಕೆಲವು ದಿನಗಳಲ್ಲಿ ಮತ್ತೆ ರಾಮುವಿನ
ಹತ್ತಿರ ಸ್ವಲ್ಪ ಹಣ ಉಳಿಯಿತು. ಈ ಬಾರಿ ಮಾತುಬಾರದ ತನ್ನ ಕತ್ತೆಯನ್ನು ನಂಬಿಕೊಂಡರೆ
ಒಳ್ಳೆಯದೆಂದುಕೊಂಡನು. ಹಗಲೆಲ್ಲ ತನ್ನ ಬಳಿಯೇ ಹಣವನ್ನು ಇಟ್ಟುಕೊಂಡು ರಾತ್ರಿ ಹೊತ್ತು ಒಂದು
ಬಟ್ಟೆಯಲ್ಲಿ ಗಂಟುಕಟ್ಟಿ ಕತ್ತೆಯ ಕೊರಳಲ್ಲಿ ಕಟ್ಟುತ್ತಿದ್ದನು ಇದರಿಂದ ನಿಶ್ಚಿಂತವಾಗಿ
ನಿದ್ರೆಮಾಡುತ್ತಿದ್ದನು.
ಒಂದು ದಿನ ಸಂತೆಯಲ್ಲಿ ರಾಮು ತನ್ನ ಸೊಂಟಕ್ಕೆ ಕಟ್ಟಿಕೊಂಡ ಗಂಟಿನಲ್ಲಿ ಹಣವನ್ನು
ಇಟ್ಟುಕೊಂಟಿದ್ದನ್ನು ಗಮನಿಸಿದ ಒಬ್ಬ ಕಳ್ಳ ರಾಮುವನ್ನು ತನ್ನ ಮನೆಯ ವರೆಗೆ ಹಿಂಬಾಲಿಸಿದನು.
ಅರ್ಧರಾತ್ರಿ ಕತ್ತಿ ಹಿಡಿದು ರಾಮುವಿನ ಗುಡಿಸಲಿಗೆ ನುಗ್ಗಿ ಗುಡಿಸಿಲಿನೆಲ್ಲ ಹುಡುಕಿದನು. ಅಲ್ಲಿ
ಹಣ ಸಿಗದಿದ್ದಾಗ ಕೋಪಗೊಂಡ ಕಳ್ಳ ರಾಮುವನ್ನು ಎಬ್ಬಿಸಿ ಕತ್ತಿಯನ್ನು ಕತ್ತಿನ ಮೇಲೆ ಇಟ್ಟು “ನಿನ್ನ ಹತ್ತಿರ ಹಣದ ಗಂಟನ್ನು ನೋಡಿದೆ
ಅದನ್ನು ಎಲ್ಲಿ ಬಚ್ಚಿಟ್ಟಿರುವೆ ಹೇಳದೆ ಹೋದರೆ ನಿನ್ನನ್ನು ಕೊಂದು ಬಿಡುತ್ತೇನೆ”ಎಂದು ಬೆದರಿಸಿದನು.
ಇನ್ನು ಹೇಳುವುದು ತಪ್ಪುವುದಿಲ್ಲವೆಂದುಕೊಂಡ ರಾಮು “ನಾನು ಕತ್ತೆಯ
ಕಷ್ಟದಿಂದ ಬದುಕುತ್ತಿದ್ದೇನೆ, ಅದೇ ನನ್ನನ್ನು ಪೋಷಿಸುತ್ತಿದೆ, ಅದೇ ನನ್ನ ಯಜಮಾನಿಯಾದ್ದರಿಂದ
ಅದರ ಹತ್ತಿರ ಇಟ್ಟಿದ್ದೆನೆ ಅದು ಕೊಡುತ್ತೇನೆಂದರೆ ತೆಗೆದುಕೊ”ಎಂದನು. ಕತ್ತೆಯ ಕೊರಳಲ್ಲಿನ ಗಂಟನ್ನು
ನೋಡಿದ ಕಳ್ಳ ನೆಮ್ಮದಿಯಾಗಿ ಅದನ ಹತ್ತಿರ ಹೋದನು. ಹೊಸ ಮನುಷ್ಯನನ್ನು ನೋಡಿದ ತಕ್ಷಣ ಕತ್ತೆ
ನಿದ್ರೆಯಿಂದ ತಟ್ಟನೆ ಎದ್ದಿತು. ಒಂದೇ ಸಮನೆ ಕೂಗತೊಡಗಿತು. ಕತ್ತೆಯನ್ನು ಹಿಡಿಯಲು
ಪ್ರಯತ್ನಿಸಿದಾಗ ಕತ್ತೆ ಕಳ್ಳನಿಗೆ ಒದ್ದು ಬಿಟ್ಟಿತು. ಆ ನೋವನ್ನು ತಾಳಲಾರದೆ ಕಳ್ಳ ಅಯ್ಯೊ
ಅಯ್ಯೋ!ಎಂದು ಚೀರಿದನು. ಇವನ ಕೂಗುಗಳಿಗೆ ಎದ್ದ ಸುತ್ತಮುತ್ತಲಿನ ಜನ ಕಳ್ಳನನ್ನು ಹಿಡಿದು ಪೋಲಿಸರಿಗೆ ಒಪ್ಪಿಸಿದರು.
“ಮನುಷ್ಯನನ್ನು ನಂಬಿದ್ದಕ್ಕೆ ನನ್ನ ಮೋಸಮಾಡಿದರು ಕತ್ತೆಯನ್ನು
ನಂಬಿದ್ದಕ್ಕೆ ನನ್ನ ಹಣವನ್ನು ನನಗೆ ಕ್ಷೇಮವಾಗಿ ಒಪ್ಪಸಿದ್ದಲ್ಲದೆ ಕಳ್ಳನನ್ನು ಹಿಡಿದುಕೊಟ್ಟಿತು”ಎಂದುಕೊಂಡ ರಾಮು ತನ್ನ ಕತ್ತೆಯನ್ನು
ಮುತ್ತಿಟ್ಟು ಅದರ ಉಪಕಾರವನ್ನು ಕೊಂಡಾಡಿದನು.


ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ