ವಿಶ್ವಮಾನವ ರಾಷ್ಟ್ರಕವಿ ಕುವೆಂಪುರವರ ೧೧೩ನೇ ಜಯಂತಿಯ ಸ್ಮರಣಾರ್ಥವಾಗಿ ಪ್ರಖ್ಯಾತ ಗೂಗಲ್ ಸಂಸ್ಥೆಯು ತನ್ನ ಮುಖ್ಯಪುಟದ ಡೂಡಲ್ ಚಿತ್ರದಲ್ಲಿ ಕುವೆಂಪು ಭಾವಚಿತ್ರ ಮತ್ತು ಕನ್ನಡ ದಲ್ಲಿ "ಗೂಗಲ್" ಶಬ್ದವನ್ನು ಬಳಸಿ ತನ್ನ ಗೌರವವನ್ನು ಸೂಚಿಸಿದೆ. ಈ ಚಿತ್ರದಲ್ಲಿ ಕುವೆಂಪುರವರು ಕುಪ್ಪಳ್ಳಿಯ ಪ್ರಕೃತಿಯ ನಡುವೆ ಕುಳಿತು ಸಾಹಿತ್ಯ ರಚಿಸುತ್ತಿರುವಂತೆ ಪ್ರದರ್ಶಿಸಲಾಗಿದೆ. ಪ್ರತಿದಿನ ಕೋಟ್ಯಾಂತರ ಮಂದಿ ಗೂಗಲ್ ಬಳಸಿದಾಗ ಈ ಚಿತ್ರವು ಅವರ ಮುಂದೆ ಪ್ರಕಟಗೊಳ್ಳುತ್ತದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯಮಟ್ಟದಲ್ಲಿ ಕುವೆಂಪುರವರ ಪರಿಚಯಕ್ಕೆ ಇದು ಸಹಕಾರಿಯಾಗಲಿದೆ.
ಕನ್ನಡ ಕವಿವಾಣಿಯು ಒಂದು ಸಾಹಿತ್ಯಿಕ ಮಾಸಪತ್ರಿಕೆಯಾಗಿದ್ದು, ಕಳೆದ ಹಲವಾರು ವರ್ಷಗಳಿಂದ ಕನ್ನಡದ ಕಂಪನ್ನು ಹರಡುವಲ್ಲಿ ತನ್ನ ಅವಿಸ್ಮರಣೀಯ ಕೊಡುಗೆಯನ್ನು ನೀಡುತ್ತಾ ಬರುತ್ತಿದೆ. ಪ್ರತಿತಿಂಗಳು ನೂರಾರು ಕನ್ನಡ ಮಿತ್ರರಿಗೆ ಉಚಿತವಾಗಿ ಸೇರಿ, ತನ್ನಲ್ಲಿ ಹುದುಗಿರುವ ಕನ್ನಡ ಸವಿಯನ್ನು ಎಲ್ಲರಿಗೂ ಉಣಬಡಿಸುತ್ತಿದೆ. ಇದು ಚಿಂತಾಮಣಿಯ ಯುವಸಾಹಿತಿ ಹಾಗೂ ಶಿಕ್ಷಕರಾಗಿರುವ ಕೆ.ಎನ್. ಅಕ್ರಂಪಾಷಾರವರ ಸಂಪಾದಕೀಯ ನೇತೃತ್ವದಲ್ಲಿ ಮೂಡಿಬರುತ್ತಿದೆ. ಯುವಕವಿ ಹಾಗೂ ಸಾಹಿತಿಗಳಿಗೆ ತಮ್ಮ ಕನ್ನಡ ಸಾಹಿತ್ಯವನ್ನು ಅಭಿವ್ಯಕ್ತಗೊಳಿಸಲು ಉತ್ತಮ ವೇದಿಕೆಯಾಗಿ ಕೂಡ ನಿರ್ವಹಿಸುತ್ತಿದೆ.
ಗುರುವಾರ, ಡಿಸೆಂಬರ್ 28, 2017
ರಾಷ್ಟ್ರಕವಿ ಕುವೆಂಪುರವರಿಗೆ ಗೂಗಲ್ ಗೌರವ
ವಿಶ್ವಮಾನವ ರಾಷ್ಟ್ರಕವಿ ಕುವೆಂಪುರವರ ೧೧೩ನೇ ಜಯಂತಿಯ ಸ್ಮರಣಾರ್ಥವಾಗಿ ಪ್ರಖ್ಯಾತ ಗೂಗಲ್ ಸಂಸ್ಥೆಯು ತನ್ನ ಮುಖ್ಯಪುಟದ ಡೂಡಲ್ ಚಿತ್ರದಲ್ಲಿ ಕುವೆಂಪು ಭಾವಚಿತ್ರ ಮತ್ತು ಕನ್ನಡ ದಲ್ಲಿ "ಗೂಗಲ್" ಶಬ್ದವನ್ನು ಬಳಸಿ ತನ್ನ ಗೌರವವನ್ನು ಸೂಚಿಸಿದೆ. ಈ ಚಿತ್ರದಲ್ಲಿ ಕುವೆಂಪುರವರು ಕುಪ್ಪಳ್ಳಿಯ ಪ್ರಕೃತಿಯ ನಡುವೆ ಕುಳಿತು ಸಾಹಿತ್ಯ ರಚಿಸುತ್ತಿರುವಂತೆ ಪ್ರದರ್ಶಿಸಲಾಗಿದೆ. ಪ್ರತಿದಿನ ಕೋಟ್ಯಾಂತರ ಮಂದಿ ಗೂಗಲ್ ಬಳಸಿದಾಗ ಈ ಚಿತ್ರವು ಅವರ ಮುಂದೆ ಪ್ರಕಟಗೊಳ್ಳುತ್ತದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯಮಟ್ಟದಲ್ಲಿ ಕುವೆಂಪುರವರ ಪರಿಚಯಕ್ಕೆ ಇದು ಸಹಕಾರಿಯಾಗಲಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ