ಬುಧವಾರ, ಡಿಸೆಂಬರ್ 13, 2017

ಅಣ್ಣನ ಒಳ್ಳೆಯತನ - ಸಣ್ಣ ಕಥೆ

ಕೃಷ್ಣಾಪುರ ಗ್ರಾಮದಲ್ಲಿ ರಾಮಯ್ಯ ಎಂಬ ವೃದ್ದ ವಾಸಿಸುತ್ತಿದ್ದನು. ಅವನಿಗೆ ಇಬ್ಬರು ಗಂಡುಮಕ್ಕಳು, ಸೂರ್ಯ & ಚಂದ್ರ. ಒಮ್ಮೆ ರಾಮಯ್ಯನ ಆರೋಗ್ಯ ಕ್ಷೀಣಿಸಿತು. ತಾನು ಇನ್ನು ಬದುಕುವುದಿಲ್ಲವೆಂದು ಭಾವಿಸಿದ ರಾಮಯ್ಯ ತನ್ನ ಹಿರಿಯ ಮಗ ಸೂರ್ಯನನ್ನು ಹತ್ತಿರ ಕರೆದು ಅದೇನೊ ಹೇಳಿ ಮರಣಹೊಂದಿದನು. ಅಣ್ಣನಿಗೆ ತಂದೆ ಏನು ಹೇಳಿರಬಹುದು? ಎಂದು ಚಂದ್ರನಿಗೆ ಅನುಮಾನ ಹುಟ್ಟಿತು. ಆ ಅನುಮಾನ ಭೂತವಾಗಿ ಬೆಳೆಯಿತು.

 ಚಂದ್ರ ಅಣ್ಣನಿಗೆ ಅಣ್ಣ ! ತಂದೆ ನಿನ್ನನ್ನು ಹತ್ತಿರ ಕರೆದು ಒಂದು ಒಡವೆಯ ಪೆಟ್ಟಿಗೆಯನ್ನು ಬಚ್ಚಿಟ್ಟಿರುವ ವಿಷಯ ಹೇಳಿದರಲ್ಲವಾ ! ನನಗೆಲ್ಲ ಗೊತ್ತು. ಆ ಒಡವೆಗಲ್ಲಿ ಒಂದು ಭಾಗವನ್ನು ನನಗೆ ಎಲ್ಲಿ ಕೊಡಬೇಕಾಗುತ್ತದೋ ಎಂದು ನೀನು ಆ ವಿಷಯವನ್ನು ನನಗೆ ಹೇಳುತ್ತಿಲ್ಲ ಎಂದನು ಕೋಪದಿಂದ. ತಮ್ಮನ ಮಾತುಗಳನ್ನು ಕೇಳಿದ ಸೂರ್ಯ ಬೆರಗಾಗಿಹೋದನು. ಅಂದಿನಿಂದ ಚಂದ್ರ ಸಣ್ಣ ಸಣ್ಣ ವಿಷಯಕ್ಕೆ ಅಣ್ಣನೊಂದಿಗೆ ಜಗಳವಾಡ ತೊಡಗಿದನು.
ಒಂದು ದಿನ ಸೂರ್ಯ ತಮ್ಮನಿಗೆ ಒಂದು ಹಳೆಯ ಪೆಟ್ಟಿಗೆಯನ್ನು ಕೊಟ್ಟು ಇದೇ ತಂದೆ ನನಗೆ ಕೊಟ್ಟ ಒಡವೆಗಳುಎಂದು ಕೊಟ್ಟನು. ಚಂದ್ರ ಆ ಒಡವೆಗಳನ್ನು ಮಾರಿ ಹಣ ತಂದುಕೊಳ್ಳಬೇಕೆಂದು ಯೇಚಿಸಿ ಪಕ್ಕದ ಊರಿನಲ್ಲಿ ಇದ್ದ ಒಬ್ಬ ವ್ಯಾಪಾರಿಯ ಹತ್ತಿರ ಹೋದನು. ವ್ಯಾಪಾರಿ ಆ ಒಡವೆಗಳನ್ನು ನೋಡಿದ ತಕ್ಷಣ ಅನುಮಾನಗೊಂಡು ರಹಸ್ಯವಾಗಿ  ಒಬ್ಬ ವ್ಯಕ್ತಿಗೆ ತಿಳಿಸಿದನು. ಅವರು ಬಂದರು. ಆ ವ್ಯಕ್ತಿ ಬೇರೆ ಯಾರೂ ಅಲ್ಲ ಚಂದ್ರನ ಅತ್ತಿಗೆಯ ತಂದೆ ಅಂದರೆ ಸೂರ್ಯನ ಮಾವ.


  ತಪ್ಪು ಹುಡುಗನೆ! ಮನೆಯ ಒಡವೆಗಳನ್ನು ಮಾರಬಾರದುಎಂದು ಹೇಳಿ ಅವರು ಚಂದ್ರನನ್ನು ಊರಿಗೆ ಕರೆದುಕೊಂಡು ಹೋದರು. ಈ ವಿಷಯ ತಿಳಿದ ಸೂರ್ಯ ತಮ್ಮನೆ ! ಆ ಒಡವೆಗಳು ನಿನ್ನ ಅತ್ತಿಗೆಯದು. ಮಾವನವರು ಆ ವ್ಯಾಪಾರಿಯ ಬಳಿ ಮಾಡಿಸಿದ ಒಡವೆಗಳು. ತಂದೆ ನನಗೆ ಒಡವೆಗಳನ್ನು ಕೊಟ್ಟಿದ್ದಾರೆಂದು ಅನುಮಾನದಿಂದ ನೀನು ನನ್ನ ಜೊತೆ ಜಗಳವಾಡಿದೆ. ಅದಕ್ಕೆ ನಿನ್ನ ಅತ್ತಿಗೆಯ ಒಡವೆಗಳನ್ನು ನಿನಗೆ ಕೊಟ್ಟು, ತಂದೆ ಕೊಟ್ಟಿದ್ದಾಗಿ ಹೇಳಿದೆ. ಇಷ್ಟಕ್ಕೂ ಆ ದಿನ ತಂದೆ ನನಗೆ ಹೇಳಿದ್ದು ಏನೆಂದರೆ ತಮ್ಮನಿಗೆ ಇನ್ನೂ ಅಣ್ಣ ಮತ್ತು ತಂದೆ ಎರಡು ನೀನೆ, ಅವನನ್ನು ಕಣ್ಣಿನ ರೆಪ್ಪೆಯಂತೆ ನೋಡಿಕೊಎಂದು. ಅದು ನಡೆದ ವಿಷಯ ಎಂದನು. ಚಂದ್ರ ಅಣ್ಣನ ಒಳ್ಳೆಯತನವನ್ನು ತಿಳಿದು, ಅಣ್ಣನ ಕಾಲಿನ ಮೇಲೆ ಬಿದ್ದು ಕ್ಷಮೆಯಾಚಿಸಿದನು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ